ಧನ ವಾಪಾಸಾತಿ ಅಹವಾಲಿಗೆ ಸಹಿ ಮಾಡುವುದರ ಮೂಲಕ ಪ್ರತಿಯೊಬ್ಬ ಭಾರತೀಯನನ್ನೂ ಶ್ರೀಮಂತ ಹಾಗು ಮುಕ್ತನನ್ನಾಗಿಸೋಣ

Responsive image

ನಲ್ಮೆಯ ಪ್ರಧಾನ ಮಂತ್ರಿಗಳೇ ಹಾಗು ಸಂಸತ್ ಸದಸ್ಯರೇ,

ಭಾರತ ಶ್ರೀಮಂತ ದೇಶ, ಆದರೆ ಭಾರತೀಯರು ಬಡವರು. ಭಾರತದ ಸಾರ್ವಜನಿಕ ಸಂಪತ್ತು ಭೂಮಿ, ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಮತ್ತು ಖನಿಜಗಳ ರೂಪದಲ್ಲಿ ಬಂಧಿಸಲ್ಪಟ್ಟಿದೆ. ಈ ಸಂಪತ್ತು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸೇರಿದ್ದಾಗಿದೆ ಮತ್ತು ಪ್ರಸ್ತುತ ಇದು ಸರ್ಕಾರದಲ್ಲಿ ಉಪಯೋಗವಾಗದೆ ವ್ಯರ್ಥವಾಗುತ್ತಿದೆ.

ಕಳೆದ 70 ವರ್ಷದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ನಮಗೆ ಸಮೃದ್ಧಿಯನ್ನು ತಂದುಕೊಡುವಲ್ಲಿ ದುರದೃಷ್ಟವಶಾತ್ ವಿಫಲವಾಗಿದ್ದು, ನಮ್ಮ ಸಂಪತ್ತನ್ನು ಅವರ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಾರ್ವಜನಿಕ ಸಂಪತ್ತು ನಿರಂತರವಾಗಿ ದುರುಪಯೋಗಕ್ಕೆ ಒಳಗಾಗುತ್ತಿದೆ. ನಾವು ಸಮೃದ್ಧ ಮತ್ತು ಸಂಪತ್ಭರಿತ ದೇಶದಲ್ಲಿ ವಾಸಿಸಲು ನಿಶ್ಚಯಿಸಿದರೆ ಮತ್ತು ನಮ್ಮ ಮಕ್ಕಳಿಗೆ ಭದ್ರ ಭವಿಷ್ಯವನ್ನು ಹೊಂದಿದ್ದರೆ, ಶಾಶ್ವತ ಶಾಪ ಎಂಬಂತೆ ಬೆನ್ನಿಗಂಟಿರುವ ಬಡತನ, ನಿರುದ್ಯೋಗ, ವಿದ್ಯಾಭ್ಯಾಸದ ಕೊರತೆ, ಆರೋಗ್ಯದ ಸಮಸ್ಯೆ ಮತ್ತು ಭ್ರಷ್ಟಾಚಾರಗಳು ಖಂಡಿತವಾಗಿಯೂ ನಮ್ಮ ಮುಂದಿನ ಜನಾಂಗಕ್ಕೆ ಮುಂದುವರೆಯುವುದಿಲ್ಲ.

ಹೆಚ್ಚುವರಿ ಸಾರ್ವಜನಿಕ ಆದಾಯವನ್ನು ತಲಾ 10 ಲಕ್ಷದಂತೆ ಪ್ರತಿಯೊಬ್ಬ ಭಾರತೀಯನಿಗೂ ಹಂಚಬಹುದು. ಹಾಗಿದ್ದಲ್ಲಿ ನಾವು ಏಕೆ ನಿರಂತರವಾಗಿ ಸಂಕಷ್ಟವನ್ನು ಅನುಭವಿಸಬೇಕು? ನಮ್ಮ ಮಕ್ಕಳು ಏಕೆ ಉಪವಾಸದಿಂದ ಮಲಗಬೇಕು? ನಮ್ಮ ಜನರು ಕನಿಷ್ಟ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಏಕೆ ಹೋರಾಟ ನಡೆಸಬೇಕು?

ಭಾರತೀಯರನ್ನು ಸಮೃದ್ಧಗೊಳಿಸುವ ಶಕ್ತಿ ನಿಮ್ಮಲ್ಲಿದೆ. ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ. ನಾವು ನಿಮ್ಮನ್ನು ನೈತಿಕವಾಗಿ ಸರಿಯಾಗಿರುವ, ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿರುವ ನಮ್ಮ ಹಕ್ಕನ್ನು ಚಲಾಯಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ದಯವಿಟ್ಟು ಧನ ವಾಪಾಸಾತಿಯನ್ನು ವಾಸ್ತವಗೊಳಿಸಿ ಮತ್ತು ಪ್ರತಿ ಭಾರತೀಯ ಕುಟುಂಬಕ್ಕೂ ಪ್ರತಿ ವರ್ಷ ತಲಾ ಒಂದು ಲಕ್ಷವನ್ನು ಹಿಂದಿರುಗಿಸಿ. 130 ಕೋಟಿ ಭಾರತೀಯರ ಆಸೆ ಆಕಾಂಕ್ಷೆಗಳು ನಿಮ್ಮ ಕೈಯಲ್ಲಿದೆ.

ಈಗ ಅಲ್ಲದಿದ್ದರೆ ಮತ್ತೆ ಯಾವಾಗ? ನೀವಲ್ಲದಿದ್ದರೆ ಇನ್ಯಾರು?

ಪ್ರಾಮಾಣಿಕವಾಗಿ,
ನಾವು, ಭಾರತದ ಪ್ರಜೆಗಳು.

ನಿಮ್ಮ ಬೆಂಬಲವನ್ನು ಸೂಚಿಸಿ

ಸಹಿ ಮಾಡುವ ಮೂಲಕ, ನಮ್ಮಿಂದ ಸಾಂದರ್ಭಿಕ ನವೀಕರಣಗಳನ್ನು ಸ್ವೀಕರಿಸಲು ನೀವು ಸಮ್ಮತಿಸುತ್ತೀರಿ. ನೀವು ಯಾವುದೇ ಸಮಯದಲ್ಲಿ ಅನ್ಸಬ್ಸ್ಕ್ರೈಬ್ ಮಾಡಬಹುದು.